ಮುಂಬಯಿ (ಆರ್ಬಿಐ), ಆ.30: ಕರ್ನಾಟಕದ ಚಿಕ್ಕಮಂಗಳೂರು ಕಂಬಿಹಳ್ಳಿ ಇಲ್ಲಿನ ದಿ| ಕೃಷ್ಣ ಕೆ.ಶೆಟ್ಟಿ ಅವರ ಧರ್ಮಪತ್ನಿ ಅಪ್ಪಿ ಕೆ.ಶೆಟ್ಟಿ (81.) ಇಂದಿಲ್ಲಿ ಸೋಮವಾರ ಚಿಕ್ಕಮಂಗಳೂರುನ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಿಧನರಾದರು.
ಸಹೃದಯಿ, ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥ ಗೃಹಿನಿಯಾಗಿ ಜೀವನ ರೂಪಿಸಿ ಸಮಾಜದ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದÀರು. ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ದಾನಧರ್ಮಗೈದು ಜನಾನುರೆಣಿಸಿದ್ದ ಮೃತರು ಆಥಿರ್üಕ ತಜ್ಞ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಎಸ್ಸ್ಸಾರ್ ಫಿನಾನ್ಶಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ, ಬಂಟ್ಸ್ ಸಂಘ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿ, ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಕ್ರೀಯರಾಗಿರುವ ಡಾ| ಆರ್.ಕೆ ಶೆಟ್ಟಿ ಸೇರಿದಂತೆ ಮೂರು ಗಂಡು ಮಕ್ಕಳು, ಬಂಧು-ಬಳಗವನ್ನು ಅಗಲಿದ್ದಾರೆ.