ಮುಂಬಯಿ, ಡಿ.05: ಸಮಾಜಮುಖಿ ಸೇವೆಗಾಗಿ ಯುವ ಸಾಧಕರಿಗೆ ಜೇಸಿಐ ಭಾರತ ನೀಡುವ ರಾಷ್ಟ್ರೀಯ ಕಮಲ ಪತ್ರ ಪ್ರಶಸ್ತಿಗೆ ಪತ್ರಕರ್ತ ಸಂದೀಪ್ ಸಾಲ್ಯಾನ್ ಭಾಜನರಾಗಿದ್ದಾರೆ.
ಬಂಟ್ವಾಳದ ಬಂಟರ ಭವನದಲ್ಲಿ ಶನಿವಾರ ಉದ್ಘಾಟನೆಗೊಂಡ ವಲಯ 15ರ ವಲಯ ಸಮ್ಮೇಳನದಲ್ಲಿ ಜೆಸಿಐ ರಾಷ್ಟೀಯ ಉಪಾಧ್ಯಕ್ಷ ಕವಿನ್ ಕುಮಾರ್, ಚಿತ್ರನಟ ಸಾಯಿ ಕುಮಾರ್, ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಜೆಸಿಐ ಬಂಟ್ವಾಳದ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಉಪಸ್ಥಿತರಿದ್ದರು.
ಸಂದೀಪ್ ಸಾಲ್ಯಾನ್ ಅವರು ಕಳೆದ 15 ವರ್ಷದಿಂದ ಬಂಟ್ವಾಳದಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದು ಹಲವಾರು ಸಮಾಜ ಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೇಸಿಐ ಬಂಟ್ವಾಳದ ಸ್ಥಾಪಕ ಸದಸ್ಯರಾಗಿ, ಪೂರ್ವಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದಲ್ಲದೆ ಸಂಸ್ಥೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ.