ಮುಂಬಯಿ (ಆರ್ಬಿಐ), ಡಿ.17: ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆ ಬಂಟ್ಸ್ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಮಹಾನಗರದಲ್ಲಿನ ಹೆಸರಾಂತ ಹಣಕಾಸುತಜ್ಞ , ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಲಹಾ ಸಮಿತಿ ಸದಸ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಆರ್.ಕೆ ಶೆಟ್ಟಿ ಮತ್ತು ಅನಿತಾ ಶೆಟ್ಟಿ ದಂಪತಿ ಸುಪುತ್ರ ತರುಣ್ ಆರ್.ಶೆಟ್ಟಿ ಇವರ ವಿವಾಹವು ಅಶೋಕ್ ಕುಮಾರ್ ಮತ್ತು ಶಾಂತಾ ಅಶೋಕ್ ಇವರ ಸುಪುತ್ರಿ ಸುಶ್ಮೀತಾ ಇವರೊಂದಿಗೆ ಇಂದಿಲ್ಲಿ ಶುಕ್ರವಾರ (ಡಿ.17) ಮುಂಬಯಿ ಅಂಧೇರಿ ಜುಹೂ ಇಲ್ಲಿನ ಇಸ್ಕಾನ್ ಮಂದಿರದಲ್ಲಿ ನೆರವೇರಿತು. ನೂರಾರು ಗಣ್ಯರು ಆಗಮಿಸಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆಗೈದ ನವಜೋಡಿಗೆ ಅಭಿನಂದಿಸಿದರು.