ಮುಂಬಯಿ (ಆರ್ಬಿಐ), ಜ.20: ಮೂಡಬಿದ್ರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕಿ ಸುಧಾರಾಣಿ ಅವರ ಸಂಶೋಧನ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಹೆಚ್ಡಿ ಪದವಿ ನೀಡಿದೆ.
ಮಂಗಳೂರು ವಿವಿ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಹಾಗೂ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ| ಆರ್.ನಾಗಪ್ಪ ಗೌಡ ಮಾರ್ಗದರ್ಶನದಲ್ಲಿ ಸುಧಾರಾಣಿ ಅವರು ತುಳು ಅನುವಾದ ವಾಙ್ಮಯ ಸಾಂಸ್ಕೃತಿಕ ಅನುಸಂಧಾನದ ನೆಲೆಗಳು ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು.
ಸುರತ್ಕಲ್ ಗೋವಿಂದದಾಸ ಕಾಲೇಜ್ನ ಹಳೇ ವಿದ್ಯಾಥಿರ್ü ಆಗಿರುವ ಸುಧಾರಾಣಿ ಅವರು ಕಟ್ಲ ದಾಮೋದರ ಶೆಟ್ಟಿ ಮತ್ತು ಸುಶೀಲಾ ಶೆಟ್ಟಿ ದಂಪತಿ ಸುಪುತ್ರಿ ಆಗಿದ್ದಾರೆ.