ಮುಂಬಯಿ, ಮಾ.13: ಉಪನಗರ ತಲೋಜಾ ಎಂಐಡಿಸಿ ಇಲ್ಲಿನ ಸರ್ವಕ್ಕೂ ಅಧಿಕ ಅಸೋಶಿಯೇಶನ್ ಹೆಗ್ಗಳಿಕೆಯ ತಲೋಜ ಇಂಡಸ್ಟ್ರೀಯಲ್ ಅಸೋಶಿಯೇಶನ್ನ (ಟಿಐಎ) ನೂತನ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಸರ್ವಾನುಮತದಿಂದ ಪುನಾರಾಯ್ಕ್ಕೆಯಾದರು. ಇತ್ತೇಚೆಗೆ ನಡೆಸಲ್ಪಟ್ಟ ಕಾರ್ಯಕಾರಿ ಸಭೆಯಲ್ಲಿ ಅಸೋಶಿಯೇಶನ್ನ 2022-2027ರ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲ್ಪಟ್ಟಿತ್ತು.
ಬಾಬು ಜಾರ್ಜ್ (ಉಪಾಧ್ಯಕ್ಷ), ವಿನೀತ್ ಸಾಲ್ಯಾನ್ (ಕಾರ್ಯದರ್ಶಿ), ರೋಹಿತ್ ಬನ್ಸಾಲ್ (ಕೋಶಾಧಿಕಾರಿ), ಜಾರ್ಜ್ ಥಪ್ಪನ್ (ಜೊತೆ ಕಾಯದರ್ಶಿ), ರೀತು ಜೈನ್ (ಜೊತೆ ಕೋಶಾಧಿಕಾರಿ) ಆಗಿ ಆಯ್ಕೆಯಾದರು.
ಶ್ರೀನಾಥ್ ಶೆಟ್ಟಿ (ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ಲಿಮಿಟೆಡ್ನ ನಿರ್ದೇಶಕ) ಭಾವೇಶ್ ಮೋದಿ, ಅಜೇಯ್ ನಾಯರ್, ಸೌರಭ್ ಶ್ಹಾ, ಜಿತೇಂದ್ರ ಪವಾರ್ ಇವರುಗಳು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಸಭೆಯು ಆಯ್ಕೆಗೊಳಿಸಿತು.
ಅವಿಭಜಿತ ಜಿಲ್ಲೆಯ ದ.ಕ ಉಡುಪಿ ಜಿಲ್ಲೆಯ ಮಂದಾರ್ತಿ ಹೆಗ್ಗುಂಗೆ ಇಲ್ಲಿನ ಹೆಬ್ಬಾಡಿ ನಿವಾಸಿ ಕೊಂಡಾರಿ ಆನಂದ ಶೆಟ್ಟಿ ಮತ್ತು ಪಾರ್ವತಿ ಶೆಟ್ಟಿ ದಂಪತಿ ಸುಪುತ್ರರಾದ ಸತೀಶ್ ಶೆಟ್ಟಿ ನವಿಮುಂಬಯಿ ತಲೋಜಾ ಇಲ್ಲಿ ತಮ್ಮ ಉದ್ಯಮ ನಡೆಸುತ್ತಿದ್ದು ಸ್ಥಾನೀಯರಲ್ಲಿ ಅಣ್ಣಾ ಎಂದೇ ಪ್ರಸಿದ್ಧರು.