Friday 26th, April 2024
canara news

ಮುಂಬಯಿಗೆ ಆಗಮಿಸಿದ ಭಾರತೀಯ ಕ್ರೀಡಾ ಲೋಕದ ದಂತಕಥೆ ಚಿರಾಗ್ ಶೆಟ್ಟಿ

Published On : 21 May 2022   |  Reported By : Rons Bantwal


ಸಂಸದ ಗೋಪಾಲ್ ಶೆಟ್ಟಿ ಮತ್ತು ಕ್ರೀಡಾಭಿಅಮಾನಿಗಳಿಂದ ಅದ್ದ್ಧೂರಿ ಸ್ವಾಗತ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ (ಆರ್‍ಬಿಐ), ಮೇ.19: ಭಾರತೀಯ ಕ್ರೀಡಾ ಲೋಕದ ದಂತಕಥೆ, ಜಗತ್ತಿನಾದ್ಯಂತ ಅನುರಣಿಸುತ್ತಿದೆ. ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ನಿನ್ನೆ ರಾತ್ರಿ ಥಾಮಸ್ ಕಪ್ ವಿಜೇತರಾಗಿ ಭಾರತಕ್ಕೆ ಮರಳಿದಾಗ, ಮುಂಬಯಿ ಅಂತರಾಷ್ಟ್ರೀಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಭಾವಂತ ಆಟಗಾರ, ಭಾರತದ ಮಿನುಗುತಾರೆ ಚಿರಾಗ್ ಶೆಟ್ಟಿ ಇವರನ್ನು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಮತ್ತು ಬಳಗ ಸೇರಿದಂತೆ ನೂರಾರು ನಾಗರಿಕರು ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿಸಿದರು.

ಅಂತರಾಷ್ಟ್ರೀಯ ಕ್ರೀಡಾ ವಿಜೇತನಾಗಿ ಭಾರತ ಮಾತೆಯ ಪುಣ್ಯಭೂಮಿಯಲ್ಲಿ ವಿಮಾನ ಇಳಿಯುವುದನ್ನು ಭಾರತವು ಆಕಾಶದಿಂದ ಕಾಯುತ್ತಿತ್ತು, ಅದರಲ್ಲಿ ಈ ಆಟಗಾರ ತನ್ನ ಸಹಚರರೊಂದಿಗೆ ತಾಯ್ನಾಡಿಗೆ ಹಿಂತಿರುಗುತ್ತಿರುವುದನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಗೋರೆಗಾಂವ್ ಸ್ಪೋರ್ಟ್ಸ್ ಕ್ಲಬ್, ಪೆÇಯಿಸರ್ ಜಿಮ್ಖಾನದÀ ಪದಾಧಿಕಾರಿಗಳು ವಿಶೇಷವಾಗಿ ಉಪಸ್ಥಿತರಿದ್ದರು.

ಥಾಮಸ್ ಕಪ್ ವಿಜೇತರಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಚಿರಾಗ್ ಶೆಟ್ಟಿ ಮತ್ತು ಅವರ ತಂಡವು ಭಾರತಕ್ಕೆ ಮರಳಿದ್ದು ವಿಮಾನ ಇಳಿದ ತಕ್ಷಣ ರಾಷ್ಟ್ರಪ್ರೇಮ ಮೊಳಗಿ "ಭಾರತ್ ಮಾತಾ ಕೀ ಜೈ" ಮತ್ತು "ವಂದೇ ಮಾತರಂ" ಎಂಬ ಘೋಷಣೆಗಳಿಂದ ಪ್ರತಿಧ್ವನಿಸಿತು. ಹದಿನಾಲ್ಕು ಬಾರಿ ವಿಜೇತ ಇಂಡೋನೇಷ್ಯಾ ಬ್ಯಾಡ್ಮಿಂಟನ್ ತಂಡವನ್ನು ಸೋಲಿಸುವ ಮೂಲಕ ಅದ್ಭುತ ಗೆಲುವು ದಾಖಲಿಸಿದ ಭಾರತ ಮಾತೆಯ ದಿಗ್ಗಜ ಆಟಗಾರ ಚಿರಾಗ್ ಶೆಟ್ಟಿ ತವರಿಗೆ ಮರಳಿದ ಕ್ಷಣ ಎಲ್ಲಾ ಭಾರತೀಯರನ್ನು ಹರ್ಷದಲ್ಲಿ ತೇಲಿಸುವಂತಿತ್ತು.

ಭಾರತ ಮತ್ತು ಈ ಬ್ಯಾಡ್ಮಿಂಟನ್ ಆಟಗಾರರಿಗೆ ಈ ಗೆಲುವು ಕನಸಿಗಿಂತ ಕಡಿಮೆಯೇನಲ್ಲ. ಚಿರಾಗ್ ಶೆಟ್ಟಿ ಪ್ರಕಾರ, ಅತ್ಯುತ್ತಮ ಆಟ ಮತ್ತು ಗೆಲ್ಲುವ ಉತ್ಸಾಹ ಮತ್ತು ಉತ್ಸಾಹದಿಂದ ಮಾತ್ರ ಇದನ್ನು ಸಾಧಿಸಲಾಗಿದೆ ಎಂದು ಚಿರಾಗ್ ಶೆಟ್ಟಿ ತಿಳಿಸಿದರು.

ಥಾಯ್ಲೆಂಡ್‍ನಿಂದ ಹಿಂದಿರುಗುವಾಗ ಮುಂಬಯಿನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣಕ್ಕೆ ಬಂದಿದ್ದ ಚಿರಾಗ್ ಶೆಟ್ಟಿ ಅವರನ್ನು ಸಂಸದ ಗೋಪಾಲ್ ಶೆಟ್ಟಿ ಮತ್ತು ಗೋರೆಗಾಂವ್ ಸ್ಪೋರ್ಟ್ಸ್ ಕ್ಲಬ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ ಪದಾಧಿಕಾರಿಗಳು ಪುಷ್ಫಗುಪ್ಛ, ಸ್ಮರಣಿಕೆಯನ್ನಿತ್ತು ಸ್ವಾಗತಿಸಿ ಅಭಿನಂದಿಸಿ ಗೌರವಿಸಿ "ಜಗತ್ತಿನಲ್ಲಿ ಹೆಮ್ಮೆಯನ್ನು ಸ್ಥಾಪಿಸಲು ಭಾರತದ ಅವಕಾಶ" ಎಂದು ಬಣ್ಣಿಸಿಭಾರತದ ಇಂತಹ ಪ್ರತಿಭೆಗಳು ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ ಎಂದು ಸಂಸದ ಗೋಪಾಲ ಶೆಟ್ಟಿ ಹಾರೈಸಿದರು.

ಚಿರಾಗ್ ಶೆಟ್ಟಿಯವರ ಜೊತೆಗಾರ ಸಾತ್ವಿಕ್ ಸಾಯಿರಾಜ್ ರೆಡ್ಡಿ ಬ್ಯಾಡ್ಮಿಂಟನ್ ತಂಡವನ್ನು ಅಭಿನಂದಿಸುತ್ತಾ ಸಂಸದ ಗೋಪಾಲ ಶೆಟ್ಟಿಯವರು ಭಾರತದ ಈ ಹೆಮ್ಮೆಯ ಕ್ಷಣವನ್ನು ಇತರ ಕ್ರೀಡಾ ಉತ್ಸಾಹಿಗಳು, ಅಧಿಕಾರಿಗಳು, ನಾಗರಿಕರು ಸ್ಮರಣೀಯವಾಗಿಸಿದರು.

ರಾಯನ್ ಪರಿವಾರ ಶ್ಲಾಘನೆ:
ಒಲಿಂಪಿಕ್ ಆಟಗಾರ, ಅರ್ಜುನ್ ಪ್ರಶಸ್ತಿ ಪುರಸ್ಕøತ ಚಿರಾಗ್ ಶೆಟ್ಟಿ ಸಾಧನೆಯನ್ನು ತನ್ನ ಮಾತಾಪಿತರಾದ ಚಂದ್ರಶೇಖರ್ ಶೆಟ್ಟಿ, ಸುಜತಾ ಶೆಟ್ಟಿ, ಸಹೋದರಿ ಕು| ಆರ್ಯ ಶೆಟ್ಟಿ ಶ್ಲಾಘಿಸಿದ್ದಾರೆ. ಚಿರಾಗ್ ಶೆಟ್ಟಿ ಅವರು ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ತುಳು-ಕನ್ನಡಿಗರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರಾಯಾನ್ ಇಂಟರ್‍ನ್ಯಾಶನ ಲ್ ಇದರ ಮಲಾಡ್ ಪಶ್ಚಿಮದ ಶಾಲಾ ವಿದ್ಯಾಥಿರ್ü. ಐಸಿಎಸ್‍ಸಿ ವಿಭಾಗದ ಶಿಕ್ಷಣ ಪೂರೈಸುತ್ತಿರುವಾಗಲೇ ಶಾಲಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ಇವರೋರ್ವ ನಮ್ಮ ಹೆಮ್ಮೆಯ ವಿದ್ಯಾಥಿರ್ü ಹಾಗೂ ರಾಯನೈಟ್ಸ್ ಎಂದೇಳಲು ಅಭಿಮಾನ ಪಡುತ್ತೇವೆ ಎಂದು ರಾಯಾನ್ ಇಂಟರ್‍ನ್ಯಾಶನಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್‍ನ ವ್ಯವಸ್ಥಾಪಕ ನಿರ್ದೇಶಕಿ ಮೇಡಂ (ಡಾ|) ಗ್ರೇಸ್ ಪಿಂಟೋ ಹರ್ಷವ್ಯಕ್ತ ಪಡಿಸಿ ಚಿರಾಗ್ ಸಾಧನೆಗೆ ಅಭಿನಂದಿಸಿದ್ದಾರೆ.

ಚಿರಾಗ್ ಶೆಟ್ಟಿ ಬ್ಯಾಡ್ಮಿಂಟನ್ ಆಟಗಾರ ಉದಯ್ ಪವಾರ್ ಅವರ ಗರಡಿಯಲ್ಲಿ ತರಬೇತಿ ಪಡೆದಿದ್ದು ಜಿಎಸ್‍ಸಿ ಇದರಲ್ಲಿ ಮಾಜಿ ಭಾರತ ಡಬಲ್ ಇಂಟರ್‍ನ್ಯಾಶನಲ್ ಕ್ರೀಡಾಪಟು ಆಗಿದ್ದಾರೆ. ತಮ್ಮ ಕ್ರೀಡಾ ಜೀವನದ ಆರಂಭಿಕ ಹಂತದಲ್ಲಿ, ಚಿರಾಗ್ ವಿವಿಧ ಪಂದ್ಯಾವಳಿಗಳಲ್ಲಿ ತನ್ನ ಪ್ರದರ್ಶನ ತೋರುತ್ತಾ ಅನೇಕ ರಾಷ್ಟ್ರೀಯ ತರಬೇತುದಾರರ ಗಮನ ಸೆಳೆದಿದ್ದಾರೆ. ಉದಯ್ ಪವಾರ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ ಹೈದರಾಬಾದ್‍ನಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಅವರ ಹೈದರಾಬಾದ್ ಮೂಲದ ಪಾಲುದಾರ ಸಾತ್ವಿಕ್‍ಸಾಯಿರಾಜ್ ರಾಂಕಿರೆಡ್ಡಿ ಕೂಡ ಚಿರಾಗ್ ಶೆಟ್ಟಿ ಜೊತೆಗೆ ಅದೇ ಅಕಾಡೆಮಿಯ ಲ್ಲಿ ತರಬೇತಿ ಪಡೆದಿದ್ದಾರೆ.

ಅಭಿನಂದನೆಗಳ ಮಹಾಪೂರ:
ಫೆಡರೇಶನ್ ಆಫ್ ವರ್ಲ್ಡ್ ಬಂಟ್'ಸ್ ಅಸೋಸಿಯೇಶನ್'ಸ್‍ನ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡೆ ಖಾತೆ ಸಚಿವ ಡಾ| ಕೆ.ಸಿ ನಾರಾಯಣ ಗೌಡ, ಬಾಂಬೇ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಮುರಳೀ ಕೆ.ಶೆಟ್ಟಿ, ಮಾಜಿ ಅಧ್ಯಕ್ಷ ನ್ಯಾ| ಉಪ್ಪೂರು ಶೇಖರ ಶೆಟ್ಟಿ, ಉಪಾಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ಎಂಆರ್‍ಜಿ ಹಾಸ್ಪಿಟಾಲಿಟಿ ಆ್ಯಂಡ್ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ, ವಿ.ಕೆ (ಮ್ಯಾಕೊೈ) ಸಮೂಹದ ಕಾರ್ಯಾಧ್ಯಕ್ಷ ಕೆ.ಎಂ ಶೆಟ್ಟಿ, ಫೆಡರೇಶನ್ ಆಫ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್‍ಸ್ ಮಹಾರಾಷ್ಟ್ರ ಅಧ್ಯಕ್ಷÀ ಡಾ| ಶಂಕರ್ ಬಿ.ಶೆಟ್ಟಿ ವಿರಾರ್, ಉಪಾಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಅಧ್ಯಕ್ಷ ಕುತ್ಪಾಡಿ ಚಂದ್ರ ಶೆಟ್ಟಿ (ಕೆ.ಸಿ ಶೆಟ್ಟಿ), ಬಂಟ್ಸ್ ನ್ಯಾಯ ಮಂಡಳಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಪೆÇಯಿಸರ್ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ ಎಸ್.ಶೆಟ್ಟಿ, ಡಾ| ಸುನೀತಾ ಎಂ.ಶೆಟ್ಟಿ, ಡಾ| ಪದ್ಮನಾಭ ವಿ.ಶೆಟ್ಟಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಗುರುವಾಯನಕೆರೆ, ತೋನ್ಸೆ ಜಯಕೃಷ್ಣ ಎ.ಶೆಟ್ಟಿ, ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು-ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್ ಹರೀಶ್ ಶೆಟ್ಟಿ, ಬಿ.ಜೆ.ಪಿ ಮೀರಾ-ಭಯಂದರ್ ಜಿಲ್ಲಾ ಉಪಾಧ್ಯಕ್ಷ ಮುನ್ನಾಲಾಯಿಗುತ್ತು ಸಚ್ಚಿದಾನಂದ ಎಂ.ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಚಿರಾಗ್ ಶೆಟ್ಟಿ ಇವರ ಸಾಧನೆ ಶ್ಲಾಘಿಸಿ ಅಭಿನಂದಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here