ಮುಂಬಯಿ, ಜು.24: ಮೀರಾರೋಡ್ ನಿವಾಸಿ ಮೂಲತಃ ಮಂಜೇಶ್ವರ ಕಿನ್ಯಗುತ್ತು ದಿ| ಕೃಷ್ಣ ಕೆ. ಶೆಟ್ಟಿ ಮತ್ತು ಬೋಳಾರ ಮಲ್ಲಿಕಾ ಕೆ.ಶೆಟ್ಟಿ ಅವರ ಸುಪುತ್ರ ಪ್ರಖ್ಯಾತ್ ಕೆ.ಶೆಟ್ಟಿ ಅವರು ಕಳೆದ ವರ್ಷ ಎಚ್.ಆರ್ ಕಾಲೇಜ್ ಚರ್ಚಗೇಟ್ ಇÀಲ್ಲಿ ಬಿ.ಕಾಂ ಪದವೀಧರಾಗಿ ಗೋರೆಗಾಂವ್ ಬಿ.ಡಿ.ಓ ಸಂಸ್ಥೆಯಲ್ಲಿ ಆರ್ಟಿಕಲ್ ಶಿಪ್ ಮಾಡುತ್ತಿದ್ದು, ತನ್ನ ಅಗತ್ಯದ ತರಬೇತಿ ಶಿಬಿರವನ್ನು ಪೂರೈಸುವ ಮೊದಲೆ ಈ ವರ್ಷದ ನಡೆದ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯನ್ನು ನೀಡಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಪ್ರಖ್ಯಾತ್ ಶೆಟ್ಟಿ ಚಿಣ್ಣರ ಬಿಂಬ ಮೀರಾರೋಡ್ ಶಿಬಿರದ ಪ್ರತಿಭಾವಂತ ವಿದ್ಯಾಥಿರ್sಯಾಗಿದ್ದಾರೆ.