ಮುಂಬಯಿ (ಆರ್ಬಿಐ), ಸೆ.30: ಉಡುಪಿ ಜಿಲ್ಲೆಯ ಕಲ್ಯಾಣ್ಫುರÀ ಸಂತೆಕಟ್ಟೆ ನಿಡಂಬಳಿ ನಿವಾಸಿ ದಾಸು ಕೆ.ಸುವರ್ಣ (66.) ಅಲ್ಪ ಕಾಲದ ಅನಾರೋಗ್ಯದಿಂದ ಇಂದಿಲ್ಲಿ ಶುಕ್ರವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಮುಂಬಯಿ ವಿರ್ಲೆಪಾರ್ಲೆ ಪರಿಸರದಲ್ಲಿ ಹಲವು ವರ್ಷಗಳ ಕಾಲ ಜನರಲ್ ಸ್ಟೋರ್ ನಡೆಸುತ್ತಿದ್ದ ಅವರು ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಿಲಿ ಇದರ ಸಂಸ್ಥಾಪಕ ಸದಸ್ಯರಾಗಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾಂದಿವಿಲಿ ಸ್ಥಳೀಯ ಕಚೇರಿ ಇದರ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರು.
ಮೃತರು ಪತ್ನಿ ಜಯಲಕ್ಷಿ ್ಮ ಹಾಗೂ ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ.