ಮುಂಬಯಿ (ಆರ್ಬಿಐ), ಸೆ.28 ಮುಂಬಯಿ ದಾದರ್ ಪಶ್ಚಿಮದ ವರ್ಲಿ ಆದರ್ಶ ನಗರದ ನಿವಾಸಿ, ಮೂಲತಃ ದ.ಕ.ಜಿಲ್ಲೆಯ ಪುತ್ತೂರು ಕರ್ನೂರು ಬಾವ ಕೆ.ಬಿ.ನಾರಾಯಣ ರೈ (76.) ಅಸೌಖ್ಯದಿಂದ ಇಂದಿಲ್ಲಿ ಬುಧವಾರ ತನ್ನ ಸ್ವಗೃಹದಲ್ಲಿ ನಿಧನರಾದರು. ಅವರು ನೈಜೀರಿಯಾದಲ್ಲಿ ಹಲವು ವರ್ಷ ಇಂಜಿನಿಯರ್ ವೃತ್ತಿಯಲ್ಲಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.