Sunday 10th, December 2023
canara news

ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಲಕ್ಷ ದೀಪೆÇೀತ್ಸವ

Published On : 30 Oct 2022   |  Reported By : Rons Bantwal


ಮುಂಬಯಿ,(ಆರ್‍ಬಿಐ)ಅ.29: ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ (ಅ.28)ರಂದು ರಾತ್ರಿ ಹೊನಲುಬೆಳಕಿನ ಸೊಬಗಿನೊಂದಿಗೆ ಭಗವಾನ್ ಚಂದ್ರನಾಥ ಸ್ವಾಮಿಗೆ ವಿಶೇಷ ಅಭಿಷೇಕ ಮಹಾ ಶಾಂತಿ ಧಾರ ಭಗವಾನ್ ಮಹಾವೀರ ನೂತನ ಸಮ್ವಸ್ಸರ 2549 ಪ್ರಯುಕ್ತ ಲಕ್ಷ ದೀಪೆÇೀತ್ಸವ ನೆರವೇರಿಸಲಾಯಿತು.

ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ವಿಶೇಷ ಪ್ರವಚನ ನೀಡಿ ಅಹಿಂಸೆ, ಅಪರಿಗ್ರಹ ಅನೇಕಾಂತದ ಸಂದೇಶ ನೀಡಿ ಸರ್ವರಿಗೂ ಹಿತಕಾರಿಯಾದ ರತ್ನತ್ರಯ ಜೀವನ ಸಂದೇಶ ನೀಡಿದ ಮಹಾವೀರ ನಿರ್ವಾಣವಾದ ದಿನ ದೀಪಾವಳಿ ನಮೆಗೆಲ್ಲ ಹೊಸ ವರ್ಷ ಸಾವಿರ ಕಂಬ ಬಸದಿ ತನ್ನ ಸರ್ವ ಜೀವ ದಯಾ ಪರವಾದ ಶ್ರಮಣ ಸಂಸ್ಕೃತಿಯೊಂದಿಗೆ ಜಗದ ವೈವಿಧ್ಯಮಯ ಕಲಾ ಸಂಸ್ಕೃತಿಯನ್ನು ಬಿತ್ತಿಗಳಲ್ಲಿ ಅರಳಿಸಿ ಪರಿಚಯಿಸುವ ಕೆಲಸ ಮಾಡಿದ ಬಹುಮುಖಿ ಸಂಸ್ಕೃತಿಗೆ ಅವಕಾಶ ನೀಡಿದ ಕೇಂದ್ರ ಧರ್ಮ, ಕಲೆ ಸಂಸ್ಕೃತಿಯ ಆರಾಧನೆ ಸದಾ ಜೀನೋತ್ಸಾಹ ನೀಡದು ಎಂದರು. ಈ ಸಂದರ್ಭದಲ್ಲಿ ಕ್ಷೇತ್ರದ ಪರವಾಗಿ ದೆಹಲಿ ಎಚ್ ಪಿ ಸಿಎಲ್ ಚೇರ್ಮನ್ ಪುಷ್ಪಕುಮಾರ್, ಕಾರ್ಯಕಾರಿ ನಿರ್ದೇಶಕ ಅನುಜ್ ಜೈನ್‍ರನ್ನು ಶ್ರೀ ಫಲ ಶಾಲು ಸ್ಮರಣಿಕೆ ನೀಡಿ ಹರಸಿ ಆಶೀರ್ವದಿಸಿದರು. ಈ ಸಂದÀರ್ಭದಲ್ಲಿ ಮಂಗಳೂರು ಭವ್ಯಾಕ್ ಶಾ ಮೂಡುಬಿದಿರೆ ಪದ್ಮಶ್ರೀ ಏಜೆನ್ಸೀಸ್ ಇದರÀ ಅಭಿಜಿತ್ ಎಂ., ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುಧೇಶ್ ಕುಮಾರ್, ಎ. ದಿನೇಶ್ ಕುಮಾರ್ ಬೆಟ್ಕೇರಿ, ಆದರ್ಶ್ ಅರಮನೆ, ಉತ್ತರ ಭಾರತದಿಂದ ವಿಶೇಷವಾಗಿ ದೆಹಲಿ ರಾಜಸ್ಥಾನ್ ಮ. ಪ್ರ, ಅಹಮ್ಮದಾಬಾದ್ ಗುಜರಾತ್ ಮಹಾರಾಷ್ಟ್ರದಿಂದ ಆಗಮಿಸಿದ್ದ ಯಾತ್ರಾಥಿರ್sಗಳು, ಊರವರು ಉಪಸ್ಥಿತರಿದ್ದರು. ಶ್ರೀ ಮಠ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ವಂದಿಸಿದರು.

 




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here