`ಭಾರತ ರತ್ನ ಪ್ರಣಬ್ ಮುಖರ್ಜಿ ಕುಲಪತಿ' ಪ್ರಶಸ್ತಿ ಪ್ರದಾನ
ಮುಂಬಯಿ (ಆರ್ಬಿಐ), ಡಿ.17: ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ| ಡಾ| ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ `ಭಾರತ ರತ್ನ ಪ್ರಣಬ್ ಮುಖರ್ಜಿ ಭಾರತದ ದೂರದೃಷ್ಟಿಯ ಕುಲಪತಿ: 2022' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಷ್ಟ್ರೀಯ ಉತ್ಕೃಷ್ಟತೆಗಾಗಿ ಶೈಕ್ಷಣಿಕ, ಕೈಗಾರಿಕೆ ಮತ್ತು ಸರ್ಕಾರದ ಸಹಯೋಗದಲ್ಲಿ ಅಸಂಖ್ಯಾತ ಕ್ರಿಯಾಶೀಲ ಸಮುದಾಯಗಳನ್ನು ಪೆÇೀಷಿಸುವ ವೇದಿಕೆಯು ಯಡಪಡಿತ್ತಾಯ ಅವರ ಶೈಕ್ಷಣಿಕ ಕ್ಷೇತ್ರದಲ್ಲಿನ ಅವರ ಕೊಡುಗೆಗಳನ್ನು ಗುರುತಿಸಿ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಮನವರಿಸಿ `ರಿಥಿüಂಕ್ ಇಂಡಿಯಾ' ಈ ಗೌರವ ಮಂಗಳೂರು ವಿವಿಯ ಕುಲಪತಿ ಅವರಿಗೆ ಸಲ್ಲಿಸಿದೆ.
ಕಳೆದ ಗುರುವಾರ (ಡಿ.15) ರಂದುನವದೆಹಲಿ ಚಾಣಕ್ಯಪುರಿ ಇಲ್ಲಿನ ಸಿವಿಲ್ ಸರ್ವಿಸಸ್ ಆಫೀಸರ್ಸ್ ಇನ್ಸ್ಟಿಟ್ಯೂಟ್ ಇಲ್ಲಿ ಡ್ಯುಯಲ್ ಮೋಡ್ನಲ್ಲಿ (ಆನ್ಲೈನ್ ಮತ್ತು ಭೌತಿಕ) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪೆÇ್ರ| ಯಡಪಡಿತ್ತಾಯ ಅವರು ಆನ್ಲೈನ್ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.