ಮುಂಬಯಿ (ಆರ್ಬಿಐ), ಜ.05: ಮಂಗಳೂರು ಬಿಕರ್ಣಕಟ್ಟೆ ಅಲ್ಲಿನ ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಇಂದಿಲ್ಲಿ ಗುರುವಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯನ್ನೀಡಿ ಬಾಲಯೇಸುವಿನ ಆಶೀರ್ವಾದಗಳನ್ನು ಪಡೆದುಕೊಂಡರು.
ಪುಣ್ಯಕ್ಷೇತ್ರವು ಆಚರಿಸುತ್ತಿರುವ 2023ನೇ ವಾರ್ಷಿಕ ಉತ್ಸವದ ಶುಭಾವಸರದ ಪ್ರಥಮ ದಿನದ ಸಂದರ್ಭ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ವಂ| ಫಾ| ಚಾರ್ಲ್ಸ್ ಸೆರಾವೊ ಸ್ವಾಗತಿಸಿದರು. ಕ್ಷೇತ್ರದ ನಿರ್ದೇಶಕ ವಂ| ಫಾ| ರೋವೆಲ್ ಡಿಸೋಜಾ ಪ್ರಾಥಿರ್üಸಿ ಹರಸಿದರು.
ಈ ಸಂದರ್ಭ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ ಖಾದರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಎಂಎಲ್ಸಿ ಐವನ್ ಡಿಸೋಜಾ ಮಾಜಿ ಶಾಸಕರಾದ ಜೆ.ಆರ್. ಲೋಬೊ. ಬಿ.ಎ ಮೊಯ್ಧೀನ್ ಬಾವಾ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ ಎ ಗಫೂರ್, ಮಂಗಳೂರುನ ಮಾಜಿ ಮೇಯರ್ ಕವಿತಾ ಸನಿಲ್ ಮತ್ತಿತರ ಗಣ್ಯರು ಹಾಜರಿದ್ದರು.