ಮುಂಬಯಿ (ಆರ್ಬಿಐ),ಮೇ.05: ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಮೇನಾಲ ಯೇಲ್ನಾಡುಗುತ್ತು ಜಲಧÀರÀ ಶೆಟ್ಟಿ (86) ಅವರು ಅಲ್ಪಕಾಲಿಕ ಅನಾರೋಗ್ಯದಿಂದ ಇಂದಿಲ್ಲಿ ಶುಕ್ರವಾರ (ಮೇ.05) ದೈವಾಧೀನರಾದರು.
ಪ್ರಗತಿಪರ ಕೃಷಿಕರಾಗಿದ್ದ ಅವರು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿ ಸುದೀರ್ಘ ವರ್ಷಗಳಿಂದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದ ಅವರು ನಾನಾ ಕ್ಷೇತ್ರಗಳಲ್ಲಿ ಸೇವಾಕರ್ತನಾಗಿ ಹಿರಿಯ ಧುರೀಣರಾಗಿದ್ದು ಎಲ್ಲರಲ್ಲೂ ಆಪ್ತರಾಗಿ ಜನಾನುರೆಣಿಸಿದ್ದರು. ಮೃತರು ಪತ್ನಿ, ಕಿಶನ್ ಜೆ.ಶೆಟ್ಟಿ ಸುಪುತ್ರ ಮತ್ತು ಇಬ್ಬರು ಸುಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.