ಹರಿನಾಮ ಸಂಕೀರ್ತನೆ, ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ , ಭಗವದ್ಗೀತೆ ಪಠನೆ
ಮುಂಬಯಿ, ಜು.02: ಗೋಪಾಲಕೃಷಣ್ ಪಬ್ಲಿಕ್ ಟ್ರಸ್ಟ್, ಗೋಕುಲ ಮತ್ತು ಬಿ. ಎಸ್.ಕೆ.ಬಿ. ಅಸೋಸಿಯೇಶನ್ ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ ಆಷಾಢ ಏಕಾದಶಿ ದೇವ ಶಯನೀ ಏಕಾದಶಿ ಪರ್ವ ದಿನವನ್ನು ಕಳೆದ ಗುರುವಾರ (ಜೂ.27) ರಂದು ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ ಮತ್ತು ಗೋಕುಲ ಭಜನಾ ಮಂಡಳಿಯ ಆಯೋಜನೆಯಲ್ಲಿ ಹರಿನಾಮ ಸಂಕೀರ್ತನೆಗಳೊಂದಿಗೆ ಅತ್ಯಂತ ಸಂಭ್ರಮದಿಂದ ಆಚರಿಸಿತು.
ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ವಿಶೇಷ ತುಳಸಿ ಮಾಲೆ, ಪುಷ್ಪ ಹಾರಗಳಿಂದ ಸಭಾಗೃಹದಲ್ಲಿ ಅಲಂಕರಿಸಿದ ತುಳಸಿ ವೃಂದಾವನದ ಮಧ್ಯೆ ಶ್ರೀ ವಿಠಲ ದೇವರ ಭಾವಚಿತ್ರವನ್ನಿಟ್ಟು ಪ್ರತಿಷ್ಠಾಪಿಸಿ, ತುಳಸಿ ಹಾರ ಪುಷ್ಪ ಹಾರಗಳಿಂದ ಶೃಂಗರಿಸಿ, ದೇವಾಲಯದ ಅರ್ಚಕ ವೇ| ಮೂ| ಗಣೇಶ್ ಭಟ್ ಅಲಂಕರಿಸಿದ್ದು ಅವರ ಪ್ರಾರ್ಥನೆಯೊಂದಿಗೆ ಬಿಎಸ್ಕೆ ಬಿ. ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಮತ್ತು ಸಂಸ್ಥೆಯ ಪದಾಧಿಕಾರಿಗಳು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ವಿಶ್ವಸ್ಥ ಮಂಡಳಿ ಸದಸ್ಯ ಮತ್ತು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜೆರಿಮೆರಿ ಅರ್ಚಕ ಎಸ್ ಎನ್. ಉಡುಪ, ಗೋಕುಲ ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರೊಂದಿಗೆ ದೀಪ ಪ್ರಜ್ವಲನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಾಂಗವಾಗಿ ಗೋಕುಲ ಭಜನಾ ಮಂಡಳಿ ಶ್ರೀ ಕೃಷ್ಣ ಭಜನಾ ಮಂಡಳಿಯೊಂದಿಗೆ ಹರಿನಾಮ ಸಂಕೀರ್ತನಾ ಸೇವೆ ಸಲ್ಲಿಸಿದ ನಂತರ ಶ್ರೀ ಸ್ಕಂದ ಭಜನಾ ಮಂಡಳಿ, ಚೆಂಬೂರು, ಶ್ರೀ ಸದ್ಗುರು ಶ್ರೀ ಕೃಷ್ಣ ಭಜನಾ ಮಂಡಳಿ, ವಿಲೇಪಾರ್ಲೆ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಅಂಧೇರಿ, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ನವಿ ಮುಂಬಯಿ, ಶ್ರೀ ಶನೀಶ್ವರ ಭಜನಾ ಮಂಡಳಿ, ನೇರೂಲ್, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ, ಜರಿಮರಿ, ಶ್ರೀ ವಿಘ್ನೇಶ್ವರ ಭಜನಾ ಮಂಡಳಿ, ಬೋರಿವಲಿ, ಶ್ರೀ ಜೈ ಅಂಬೆ ಚಾರಿಟೇಬಲ್ ಟ್ರಸ್ಟ್ ಭಜನಾ ಮಂಡಳಿ, ಸಾನ್ಪಾಡಾ , ಶ್ರೀ ರಾಮ ಭಜನಾ ಮಂಡಳಿ, ನೇರೂಲ್, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ, ನೇರೂಲ್, ಶ್ರೀ ನಿತ್ಯಾನಂದ ಚಾಮುಂಡೇಶ್ವರಿ ಭಜನಾ ಮಂಡಳಿ, ಸಾಕಿನಾಕಾ ಪಾಲ್ಗೊಂಡು, ಅತ್ಯಂತ ಭಕ್ತಿಭಾವದಿಂದ ಸಂಕೀರ್ತನಾ ಸೇವೆ, ನೃತ್ಯ ಭಜನಾ ಸೇವೆ ಸಲ್ಲಿಸಿತು.
ಬೆಳಿಗ್ಗೆಯಿಂದ ಮಹಿಳೆಯರಿಂದ ಭಗವದ್ಗೀತೆ ಪಠನೆ ಮತ್ತು ಅಂದು ವಿಶೇಷವಾಗಿ ಆಯೋಜಿಸಿದ ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆಯು ಜರಗಿತು. ವೇ| ಮೂ| ಸುದರ್ಶನ ಸೂರ್ಯ ನೀಲಾವರ ಅವರು ಸೇವಾಥಿರ್sಗಳಿಗೆ ಸಾಮೂಹಿಕ ಸಂಕಲ್ಪ ನೆರವೇರಿಸಿ ಗುರುಪ್ರಸಾದ್ ಭಟ್ ಅವರೊಂದಿಗೆ ವಿಷ್ಣು ಸಹಸ್ರ ನಾಮ ಪಠನೆ ಗೈದರು. ಅವರೊಂದಿಗೆ ಭಕ್ತಾದಿಗಳು ವಿಷ್ಣು ಸಹಸ್ರ ನಾಮ ಪಠಣೆಯೊಂದಿಗೆ ಶ್ರೀ ಕೃಷ್ಣನಿಗೆ ತುಳಸಿ ಅರ್ಚನೆ ಗೈದರು. ಅಂತೆಯೇ ವೇದಮೂರ್ತಿ ಗಣೇಶ್ ಭಟ್ ರವರು ಶ್ರೀ ಗೋಪಾಲಕೃಷ್ಣ ದೇವರಿಗೆ ವಿಷ್ಣು ಸಹಸ್ರನಾಮದೊಂದಿಗೆ ತುಳಸಿ ಅರ್ಚನೆ ಗೈದು ಮಹಾ ಪೂಜೆ, ಮಹಾ ಮಂಗಳಾರತಿ ಬೆಳಗಿದರು. ಗೋಕುಲ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ರಾವ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಣೆ ಗೈದರು.