ಮುಂಬಯಿ (ಆರ್ಬಿಐ), ಜು.01: ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಮಾಜಿ ಅಧ್ಯಕ್ಷ ಮತ್ತು ಹಾಲಿ ಗೌರವಾಧ್ಯಕ್ಷರಾಗಿದ್ದ ದಿ| ಜಯ ಸಿ.ಸುವರ್ಣ ಅವರ ಧರ್ಮಪತ್ನಿ ಲೀಲಾವತಿ ಜೆ.ಸುವರ್ಣ (72.) ಇಂದಿಲ್ಲಿ ಶನಿವಾರ ರಾತ್ರಿ ಮಹಿಮ್ನ ಹಿಂದೂಜಾ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಉಡುಪಿ ಪಡುಬಿದ್ರಿ ಪಡುಹಿತ್ಲು ಸೋಮನಾಥ ನಿವಾಸಿ ಮೂಲತಃ ಇವರು ಧರ್ಮಶ್ರದ್ಧಾಳು, ಕೊಡುಗೈದಾನಿಯಾಗಿದ್ದ ಮೃತರು ಗೋರೆಗಾಂವ್ ಪೂರ್ವದಲ್ಲಿನ ನೀಲ್ಗಿರಿ ನಿವಾಸದಲ್ಲಿ ತನ್ನ ಪರಿವಾರದೊಂದಿಗೆ ವಾಸವಾಗಿದ್ದು, ನಾಲ್ವರು ಸುಪುತ್ರರು (ಸೂರ್ಯಕಾಂತ್ ಜೆ.ಸುವರ್ಣ, ಸುಭಾಶ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ, ಯೋಗೇಶ್ ಜೆ.ಸುವರ್ಣ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.