Friday 9th, May 2025
canara news

ಥಾಣೆ ಘೋಡ್‍ಬಂದರ್‍ನಲ್ಲಿ ನಿರ್ಮಾಣದ ಜಿಎಸ್‍ಬಿ ಸೇವಾ ಮಂಡಳ್ ಆಸ್ಪತ್ರೆಗೆ

Published On : 05 Nov 2023   |  Reported By : Rons Bantwal


ಒಂದು ಕೋಟಿ ದೇಣಿಗೆ ನೀಡಿದ ಬಾಲಿವುಡ್ ನಟಿ ಐಶ್ವರ್ಯಾ ರೈ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.02: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನ 50ನೇ ವರ್ಷಕ್ಕೆ ಕಾಲಿಟ್ಟ ಶುಭಾವಸರದಲ್ಲಿ ಜಿಎಸ್‍ಬಿ ಸೇವಾ ಮಂಡಳ್ ಮುಂಬಯಿ ಕಳೆದ ಬುಧವಾರ (ನ.01) ಉಪನಗರ ಜೂಹು ಇಲ್ಲಿನ ಎ ಲಾ-ಮೋಡ್ ಬಾಂಕ್ವೇಟ್ಸ್ ಸಭಾಗೃಹದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಎಸ್‍ಬಿ ಸೇವಾ ಮಂಡಳ್‍ನ ಆಸ್ಪತ್ರೆಗೆ ಸೇವಾ ಸಂಪರ್ಣ ಆಗಿಸಿ ರೂಪಾಯಿ ಒಂದು ಕೋಟಿ ದೇಣಿಗೆ ನೀಡಿದರು.

ಐಶ್ವರ್ಯಾ ತನ್ನ ತಾಯಿ ವೃಂದಾ ಕೃಷ್ಣ ರೈ ಮತ್ತು ಮಗಳು ಆರಾಧ್ಯ ಅಭಿಷೇಕ್ ಬಚ್ಚನ್ ಅವರೊಂದಿಗೆ ಕಾರ್ಯಕ್ರಮದÀಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿದರು. ಜಿಎಸ್‍ಬಿ ಸೇವಾ ಸಮಾಜ ಥಾಣೆ ಘೋಡ್‍ಬಂದರ್ ವರ್ಸಾವೇ ಇಲ್ಲಿ ನಿರ್ಮಾಣಗೊಳ್ಳುವ ನೂತನ ಆಸ್ಪತ್ರೆಗೆ ರೂಪಾಯಿ 1 ಕೋಟಿ ದೇಣಿಗೆ ನೀಡಿದರು.

ತನ್ನ ತಂದೆ ಸ್ವರ್ಗೀಯ ಕೃಷ್ಣ ರೈ ಅವರಿಗೆ ಗೌರವ ಸಲ್ಲಿಸಿ ನಗರದಲ್ಲಿ ನಿರ್ಮಿಸಲ್ಪಡುವ ಹೊಸ ಆಸ್ಪತ್ರೆಗಾಗಿ ತನ್ನ ಫೌಂಡೇಶನ್‍ನಿಂದ ಒಂದು ಕೋಟಿ ದೇಣಿಯನ್ನಿತ್ತರು. ಈ ಸಂದರ್ಭದಲ್ಲಿ ಜಿಎಸ್‍ಬಿ ಸೇವಾ ಮಂಡಲ ಮುಂಬಯಿ ಸಂಚಾಲಕ ಡಾ| ಭುಜಂಗ ಪೈ, ಸಾಣೂರು ಮನೋಹರ್ ವಿ.ಕಾಮತ್ (ಉಪಾಧ್ಯಕ್ಷ ಜಿಎಸ್‍ಬಿ ಸೇವಾ ಸಭಾ ದಹಿಸರ್-ಬೊರಿವಿಲಿ) ಮತ್ತಿತರ ಗಣ್ಯರು ಉಪಸ್ಥಿತರಿದ್ದು ದೇಣಿಯ ಚೆಕ್‍ನ್ನು ಸ್ವೀಕರಿಸಿ ಅಭಿವಂದಿಸಿದರು.

ಈ ಸಂದರ್ಭದಲ್ಲಿ ಸಹ ಸಂಚಾಲಕರಾದ ಗಣೇಶ್ ಪ್ರಭು, ಜಿ.ಡಿ ರಾವ್ ಮತ್ತು ರವಿ ಎಂ.ವಿ ಕಿಣಿ, ಆರ್.ಜಿ ಭಟ್, ವಿಜಯ್ ಕಾಮತ್, ಯಶವಂತ್ ಕಾಮತ್, ಶಿವಾನಂದ ಭಟ್, ಸುಪ್ರಿಯಾ ಭಟ್ ಡೊಂಬಿವಲಿ ಮತ್ತು ನಿತಿನ್ ಪ್ರಭು ವಾಶಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ಕರ್ವಾ ಚೌತ್‍ನಲ್ಲಿ ಪತಿ ಅಭಿಷೇಕ್ ಬಚ್ಚನ್‍ಗಾಗಿ ಉಪವಾಸ ಮಾಡುತ್ತಿದ್ದ ಐಶ್ವರ್ಯಾ ಕೇಕ್ ತುಂಡು ತಿನ್ನದೆ ನಂತರ ಹುಟ್ಟುಹಬ್ಬದ ಹುಡುಗಿ ತನ್ನ ತಾಯಿ ಮತ್ತು ಮಗಳೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ವಿಘ್ನವಿನಾಯಕ ಬಪ್ಪನ ಆಶೀರ್ವಾದ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here