Friday 29th, March 2024
canara news

ಶ್ಯಾಮಲಾ ಮಾಧವ - ಪರಿಚಯ

Published On : 30 Mar 2015   |  Reported By : Rons Bantwal


ಹುಟ್ಟೂರು ಮಂಗಳೂರು. ತಂದೆ ಶ್ರೀ ನಾರಾಯಣ ಯು . ಹಾಗೂ ತಾಯಿ ಶ್ರೀಮತಿ ವಸಂತಿ. ತಂದೆ ನಾರಾಯಣ ಯು. ಮಂಗಳೂರ ಸೆರಗಿನ ಸೋಮೇಶ್ಡರ ಉಚ್ಚಿಲದ ಶಾಲಾ ಕರೆಸ್ಪಾಂಡೆಂಟ್ ಆಗಿ ಶೈಕ್ಷಣಿಕ ಕ್ಷೇತ್ರ, ಸಹಕಾರಿ ಕ್ಷೇತ್ರಗಳಲ್ಲಿ ದುಡಿದವರು . ಸುವಿಚಾರ, ಸದಾಚಾರಗಳ , ಮಿತಮಾತಿನ ಸತ್ಯನಿಷ್ಠರು. ತಾಯಿ ಶ್ರೀಮತಿ ವಸಂತಿ , ನಗರದ ಬೆಸೆಂಟ್ ಶಾಲೆಯಲ್ಲಿ ಪಿ.ಟಿ. ಹಾಗೂ ಗೈಡಿಂಗ್ ಶಿಕ್ಷಕಿಯಾಗಿ , ಶಿಸ್ತು, ಸೇವೆ, ದಕ್ಷತೆಗೆ ಹೆಸರಾದವರು.ಅಂತೆಯೇ ಮನೆಯಲ್ಲಿ ಪರಿಪೂರ್ಣ ಗೃಹಿಣಿ.

ಬೆಸೆಂಟ್ ರಾಷ್ಟ್ರೀಯ ಪಾಠಶಾಲೆಯಲ್ಲೇ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ. ಬಳಿಕ ನಗರದ ಸೈಂಟ್ ಆಗ್ನಿಸ್ ಹೈಸ್ಕೂಲ್, ಹಾಗೂ ಕಾಲೇಜ್ಗಳಲ್ಲಿ ವಿದ್ಯಾಭ್ಯಾಸ ಮುಂದರಿಕೆ . ವಿಜ್ಞಾನದ ವಿದ್ಯಾಥಿ೯ನಿಯಾದರೂ, ಬಾಲ್ಯದಿಂದಲೇ ಮನೆಯಲ್ಲೂ, ಶಾಲೆಯಲ್ಲೂ , ಮನೆಯ ಸುತ್ತಣ ನಗರದ ವಾಚನಾಲಯಗಳಿಂದಲೂ ಬೆಳೆಸಿಕೊಂಡ ಕನ್ನಡ, ಇಂಗ್ಲಿಷ್ ಸಾಹಿತ್ಯ ಪ್ರೀತಿ . ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಸೆಂಟ್ ಶಾಲೆಯಲ್ಲಿ ಆಚರಿಸಲ್ಪಡುತ್ತಿದ್ದ ರಾಷ್ಟ್ರೀಯ ಹಬ್ಬಗಳು , ಡಾ. ಶಿವರಾಮ ಕಾರಂತರ ನೃತ್ಯ ನಾಟಕಗಳು ,ಪಂಡಿತ ಪಿ.ಕೆ. ನಾರಾಯಣರ ದೇಶಭಕ್ತಿ ತುಂಬಿದ ಕ್ರಾಂತಿ ಗೀತೆಗಳು , ಅಲ್ಲಿನ ಶಿಕ್ಷಕ ವೃಂದ, ನಗರ ಹಾಗೂ ಸೋಮೇಶ್ವರ ಉಚ್ಚಿಲದ ಸುರಮ್ಯ ಪ್ರಕೃತಿ ಬೀರಿದ ಪರಿಣಾಮ ಅಪಾರ.

ಹನ್ನೊಂದರ ಹರೆಯದಲ್ಲಿ ಪ್ರಥಮ ಕವನ " ಕಡಲಿನ ಕರೆ " , ರಾಷ್ಟ್ರಬಂಧು ಪತ್ರಿಕೆಯಲ್ಲಿ ಪ್ರಕಟ.

ಕಾಲೇಜ್ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬೈ ವಾಸ. ಅಲ್ಲಿ, ಅಜ್ಜಿಮನೆಯನ್ನು ನೆನೆಸಿ ಕೊಂಡು ಬರೆದ " ಅಮೃತ ವಷಿ೯ಣಿ "" ಬೆಳ್ಳಿ" ಯಲ್ಲಿ ಪ್ರಕಟ. ಪ್ರಥಮ ಕಥೆ " ಅಶೋಕ "ವೂ ಬೆಳ್ಳಿಯಲ್ಲಿ ಪ್ರಕಟ.

ಮುಂದೆ ನಾಡಿನ ಹಾಗೂ ಮುಂಬೈಯ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನ, ಪ್ರವಾಸ ಕಥನ, ವ್ಯಕ್ತಿ ಪರಿಚಯ, ಅನುವಾದ ಕೃತಿಗಳು ಪ್ರಕಟ.

ಪ್ರಕಟಿತ ಕೃತಿಗಳು ;
ದೂರದರ್ಶನದಲ್ಲಿ ಧಾರಾವಾಹಿಯಾಗಿ ಮನಸೆಳೆದ " ಫಮಾ೯ನ್ " ಪ್ರಸಾರ ಮುಗಿದಾಗ, ಮೂಲಕೃತಿ " ಆಲಂಪನಾ " ಪುಸ್ತಕವನ್ನರಸಿ ಪಡೆದು, ಆ ಉತ್ಕೃಷ್ಟ ಉದೂ೯ ಸಾಹಿತ್ಯಕೃತಿಯ ಹಿಂದೀ ಅನುವಾದದ ಸೊಸು, ಶ್ರೇಷ್ಠತೆಗೆ ಮಾರು ಹೋಗಿ, ಕನ್ನಡಕ್ಕೆ 

ಅನುವಾದಿಸಿದ ಕೃತಿ, " ಆಲಂಪನಾ " , ಭಾಗೀರಥಿ ಪ್ರಕಾಶನದಿಂದ 1994ರಲ್ಲಿ ಪ್ರಕಟಿತ. .

ತಂದೆಯವರು ಹಾಗೂ ಹಿರಿಯ ಪರಂಪರೆಯನ್ನು ಸ್ಮರಿಸಿ ಬರೆದು, ಸಂಪಾದಿಸಿದ ಕೃತಿ " ಸತ್ಸಂಚಯ " 2003ರಲ್ಲಿ ಗುಡ್ಡೆಮನೆ ಪ್ರಕಾಶನದಿಂದ ಪ್ರಕಟ.

' ಆಲಂಪನಾ" ಕೃತಿಯ ಯಶಸ್ಸಿನ ಬೆನ್ನಿಗೇ , ಅತ್ಯಂತ ಪ್ರಿಯವಾಗಿ ಹೃದಯದಲ್ಲಿ ಅಚ್ಚೊತ್ತಿ ಕೊಂಡ ಆಂಗ್ಲ ಸಾಹಿತ್ಯ ಕೃತಿ , ಅಮೆರಿಕನ್ ಸಾಹಿತಿ ಮಾರ್ಗರೆಟ್ ಮಿಶೆಲ್ಳ " ಗಾನ್ ವಿದ್ ದ ವಿಂಡ್ " ವಿಶ್ವಸಾಹಿತ್ಯ ಕೃತಿಯ ಕನ್ನಡಾನುವಾದಕ್ಕೆ ತೊಡಗಿ, ವರ್ಷದಲ್ಲೇ ಪೂರೈಸಿದ ಕನ್ನಡಾನುವಾದವು, ಸುದೀರ್ಘವೆಂಬ ಕಾರಣದಿಂದ ಒಳಗುಳಿದು, ಹತ್ತು ವರ್ಷಗಳ ಬಳಿಕ, 2004 ರಲ್ಲಿ ಅಂಕಿತ ಪುಸ್ತಕದಿಂದ ಬೆಳಕು ಕಂಡಿತು .ಯಶಸ್ಸು, ಕೀತರ್ಿಗೆ ಭಾಜನವಾಯ್ತು.2004ರಲ್ಲಿ ಅನುವಾದಿಸಿದ, ನಿವೃತ್ತ ಪೊಲೀಸ್ ಅಧಿಕಾರಿ ರಾಮಯ್ಯ ರೈ ಅವರ " ಮೈ ಡೇಸ್ ಇನ್ ಪೊಲಿಸ್" ಕೃತಿಯ ಅನುವಾದ, " ಪೊಲಿಸ್ ಡೈರಿ ", 2005ರಲ್ಲಿ " ಸುಧಾ " ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯವಾಯ್ತು. ಆಂಗ್ಲ ಲೇಖಕಿ ಮೇರಿ ಶೆಲ್ಲಿಯ ವಿಶ್ವಸಾಹಿತ್ಯ ಕೃತಿ " ಫ್ರಾಂಕಿನ್ಸ್ಟೈನ್ " ಕಾದಂಬರಿಯ ಕನ್ನಡಾನುವಾದವು, 2007ರಲ್ಲಿ ಅಂಕಿತ ಪುಸ್ತಕದಿಂದ ಬೆಳಕು ಕಂಡು, ವಿದ್ವತ್ ವಲಯದಲ್ಲಿ ಮನ್ನಣೆ ಪಡೆಯಿತು.

ಕಥಾ ಸಂಗ್ರಹ, " ಆ ಲೋಕ ", 2009ರಲ್ಲಿ ಸುಮುಖ ಪ್ರಕಾಶನದಿಂದ ಬೆಳಕು ಕಂಡಿತು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ, ಭಾಗಶಃ ಅನುವಾದಿಸಿದ ಆಂಗ್ಲ ಲೇಖಕ ವಿಲ್ ಡ್ಯುರಾಂಟ್ ಅವರ " ದ ಸ್ಟೋರಿ ಆಫ್ ಸಿವಿಲಿಸೇಶನ್ "ಕೃತಿಯ ಅನುವಾದದ ಭಾಗಗಳನ್ನೊಳಗೊಂಡ ಸಂಪೂರ್ಣ ಬೃಹತ್ ಕೃತಿ, ಪ್ರಾಧಿಕಾರದಿಂದ 2012ರಲ್ಲಿ ಪ್ರಕಟವಾಗಿ ಕೈ ಸೇರಿತು.

ಎಂ .ಆರ್.ಪೈ ಫೌಂಡೇಶನ್ಗಾಗಿ ಅನುವಾದಿಸಿ ಕೊಟ್ಟ " ಎಂ.ಆರ್.ಪೈ - ಆನ್ ಅನ್ಕಾಮನ್ ಕಾಮನ್ ಮ್ಯಾನ್ " ಕೃತಿಯ ಅನುವಾದ , " ಅಸಾಮಾನ್ಯ ಶ್ರೀ ಸಾಮಾನ್ಯ ಎಂ.ಆರ್ . ಪೈ " ಕೃತಿ, 2013ರಲ್ಲಿ ಐ.ಬಿ.ಎಚ್. ಪ್ರಕಾಶನದಿಂದ ಬೆಳಕು ಕಂಡಿತು.

ಲೇಖನ ಸಂಗ್ರಹ, " ಬದುಕು ಚಿತ್ರ ಚಿತ್ತಾರ " , ಬರಹ ಪಬ್ಲಿಕೇಶನ್ಸ್ನಿಂದ 2013ರಲ್ಲಿ ಪ್ರಕಟವಾಯ್ತು.

ಸ್ಪಾರೋ ಸಂಸ್ಥೆಗಾಗಿ [ ಸ್ಪೀಚ್ & ಪಿಕ್ಚರ್ ಆಕೆೃ೯ವ್ ರಿಟ್ರೀವ್ & ರಿಸಚ್೯ ಆನ್ ವಿಮೆನ್ " } ಮಾಡಿ ಕೊಟ್ಟ ಬಿ.ಟಿ.ಲಲಿತಾ ನಾಯಕ್ ಅವರ ಎರಡು ಸಣ್ಣ ಕತೆಗಳ ಇಂಗ್ಲಿಷ್ ಅನುವಾದ ಸಂಸ್ಥೆಯ ಆಕೆೃ೯ವ್ ಸೇರಿದೆ.

ಕಲ್ಕತ್ತಾದ ಕೃತಿ ಪ್ರಕಾಶನಕ್ಕಾಗಿ ಅನುವಾದಿಸಿದ ತುಳಸೀ ವೇಣು ಗೋಪಾಲ್ ಅವರ " ಹೊಂಚು" ಕಥೆಯ ಇಂಗ್ಲಿಷ್ ಅನುವಾದ " ಕಥಾ" ಸಂಚಯದಲ್ಲಿ 2011ರಲ್ಲಿ ಪ್ರಕಟಿತ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಭಾಗಶಃ ಮರಾಠಿಯಿಂದ ಅನುವಾದಿಸಿ ಕೊಟ್ಟ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು , ಪ್ರಾಧಿಕಾರದಿಂದ ಪ್ರಕಟವಾಗುತ್ತಿದೆ.

ಆಂಗ್ಲ ಲೇಖಕಿ, ಶಾಲಟ್ ಬ್ರಾಂಟಿಯ ವಿಶ್ವ ಸಾಹಿತ್ಯ ಕೃತಿ, " ಜೇನ್ ಏರ್ ", ಬೆಂಗಳೂರಿನ ತೇಜು ಪ್ರಕಾಶನದಿಂದ ಇದೀಗ ಬಿಡುಗಡೆಯ ಹಂತದಲ್ಲಿದೆ .

ಪ್ರಕಟಣೆಗೆ ಕಾದಿರುವ ಅನುವಾದ ಕೃತಿಗಳು ;

ಅರುಂಧತಿ ರಾಯ್ ವಿರಚಿತ " ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್ " ಕೃತಿಯ ಪೂರ್ಣ ಕನ್ನಡಾನುವಾದ ಪ್ರಕಟಣೆಗೆ ಕಾದಿದೆ.

ಬರವಣಿಗೆಯ ಹಾದಿಯಲ್ಲಿ ;

ಆಂಗ್ಲ ಲೇಖಕಿ ಎಮ್. ಎಮ್. ಕೇ ವಿರಚಿತ ಬೃಹತ್ಕೃತಿ, " ಫಾರ್ ಪೆವಿಲಿಯನ್ಸ್ " ಅನುವಾದ ಸಾಗಿದೆ.

ಪ್ರಶಸ್ತಿ ವಿವರ
" ಗಾನ್ ವಿತ್ ದ ವಿಂಡ್ " ಕೃತಿಗೆ ಕನರ್ಾಟಕ ಸಾಹಿತ್ಯ ಅಕಾಡೆಮಿಯಿಂದ 2004ರ ಅತ್ಯುತ್ತಮ ಅನುವಾದವೆಂದು ಪುಸ್ತಕ ಬಹುಮಾನ.

" ಗಾನ್ ವಿತ್ ದ ವಿಂಡ್ " ಕೃತಿಗೆ ಕ ನಾ೯ಟಕ ಲೇಖಕಿಯರ ಸಂಘದಿಂದ ಅತ್ಯುತ್ತಮ ಅನುವಾದವೆಂದು 2005ರ ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಅನುವಾದ ಕ್ಷೇತ್ರದ ಒಟ್ಟು ಸಾಧನೆಗಾಗಿ 2014ರ ಗೌರವ ಪ್ರಶಸ್ತಿ ಪ್ರಕಟ.

ಅನುವಾದ ಕೃತಿ " ಆಲಂಪನಾ ", ಕೇಂದ್ರ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಅನುವಾದ ಕೃತಿಗಾಗಿ ಕೊನೆಯ ಸುತ್ತಿನ ಸ್ಪಧೇ೯ಗಾಗಿ ಸತತ ಎರಡು ವರ್ಷ ಆಹ್ವಾನಿತವಾಗಿತ್ತು.

ಅನುವಾದ ಕೃತಿ " ಫ್ರಾಂಕಿನ್ಸ್ಟೆನ್ " , ಅನುವಾದ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸ್ಪಧೇ೯ಯಲ್ಲಿ ಕೊನೆಯ ಸುತ್ತಿನಲ್ಲಿ ಪರಿಗಣಿತವಾಗಿತ್ತು.

ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದಿಂದ 2010ರಲ್ಲಿ ಗೌರವ ಪುರಸ್ಕಾರ ಪ್ರಾಪ್ತವಾಯ್ತು.

ಹುಟ್ಟೂರಿನ ಸಾಂಸ್ಕೃತಿಕ ವೇದಿಕೆಯಿಂದ 2010ರಲ್ಲಿ ಗೌರವ ಪುರಸ್ಕಾರ.

"ಆಲಂಪನಾ " ಪ್ರಕಟವಾದ ಬೆನ್ನಲ್ಲೇ, ವೈ.ಎಂ.ಬಿ.ಎ. ಸಂಸ್ಥೆಯಿಂದ ಗೌರವ ಪುರಸ್ಕಾರ ಪ್ರಾಪ್ತ .

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here