ಮುಂಬಯಿ (ಆರ್ಬಿಐ), ನ.27: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ 2020 ಪುರಸ್ಕೃತ ಮಂಗಳೂರು ನಗರದ ಟ್ರಾಫಿಕ್ ವಾರ್ಡನ್ ಮ್ಯಾಕ್ಸಿಮ್ ಮೊರಾಸ್ ಅವರನ್ನು ಮಂಗಳೂರು ಬಿಕರ್ನಕಟ್ಟೆ ಇಲ್ಲಿನ ಬಾಲಯೇಸು ದೇವಮಂದಿರದಲ್ಲಿ ಇತ್ತೀಚೆಗೆ ಗೌರವಿಸಲಾಯಿತು.
ಕಾರ್ಮೆಲಿತ್ ಸಮುದಾಯದ ಸುಪೀರಿಯರ್ ರೆ| ಫಾ| ಚಾರ್ಲ್ಸ್ ಸೆರಾವೊ, ದೇವಾಲಯದ ಅಧ್ಯಾತ್ಮಿಕ ನಿರ್ದೇಶಕರಾದ ರೆ| ಫಾ| ರೋವೆಲ್ ಡಿಸೋಜಾ, ರೆ| ಫಾ| ಐವಾನ್ ಡಿಸೋಜಾ, ಫಾ| ಲ್ಯಾನ್ಸಿ ಮತ್ತು ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಧರಗುರುಗಳು ಮೊರಾಸ್ ಅವರ ನಿಷ್ಠಾವಂತ ಸೇವೆ ಮೆಚ್ಚಿ ಪ್ರಶಂಸಿಸುತ್ತಾ ಮೋರಾಸ ಮತ್ತು ಪರಿವಾರಕ್ಕೆ ಬಾಲಯೇಸುವಿನ ಆಶೀರ್ವಾದವನ್ನು ಪ್ರಾಥಿರ್üಸಿದರು. ನಗರದ ಪದುವಾ ಶಾಲಾ ಜಂಕ್ಷನ್ ಮತ್ತು ನಂತೂರು ವೃತ್ತದÀಲ್ಲಿ ಹಲವಾರು ವರ್ಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಮುಕ್ತವಾಗಿ ಸೇವೆ ಸಲ್ಲಿಸುತ್ತಿದ್ದ ಮೊರಾಸ್ ಸರ್ವರಿಗೂ ಅಭಿವಂದಿಸಿದರು.