ಡಾ| ಗಣೇಶ ಅಮೀನ್ ಸಂಕಮಾರ್ ಆತ್ಮಕಥನ `ಮಣ್ಣಿನೊಳಗಿನ ಅನ್ನ' ಕೃತಿ ಬಿಡುಗಡೆ
ಮುಂಬಯಿ (ಆರ್ಬಿಐ), ಜ.23: ಸಿರಿ ಪ್ರಕಾಶನ ಪಾವಂಜೆ ಮತ್ತು ಆಕೃತಿ ಆಶಯ ಪಬ್ಲಿಕೇಷನ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ಜ.27ನೇ ಬುಧವಾರ ಸಂಜೆ 6.00 ಗಂಟೆಯಿಂದ ಸಿರಿ ಪಾವಂಜೆ ಸಿರಿಮನೆಯ ಅನುಭವ ಮಂಟಪದಲ್ಲಿ ನಾಡಿನ ಹೆಸರಾಂತ ವಿದ್ವಾಂಸ, ಸಾಹಿತಿ ಡಾ| ಗಣೇಶ ಅಮೀನ್ ಸಂಕಮಾರ್ ಅವರ ಆತ್ಮಕಥನ `ಮಣ್ಣಿನೊಳಗಿನ ಅನ್ನ' ಕೃತಿ ಬಿಡುಗಡೆ ನಡೆಯಲಿದೆ.
Pro. P. S yadapadithaya.
Dr. Vivek Rai
Capt. Ganesh Karnik
Dr. Mohan Alva
Dr Ganesh Sankamar
ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿ ಪೆÇ್ರ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ.
ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆ ಮೂಡುಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಮುಖ್ಯ ಅತಿಥಿüಯಾಗಿ ಮತ್ತು ಕಡಂಬೋಡಿ ಮಹಾಬಲ ಪೂಜಾರಿ ಅತಿಥಿü ಅಭ್ಯಾಗತರಾಗಿ ಆಗಮಿಸಲಿದ್ದು ತುಳು ಕನ್ನಡ ವಿದ್ವಾಂಸ, ವಿಶ್ರಾಂತ ಕುಲಪತಿ ಪೆÇ್ರ| ಬಿ.ಎ. ವಿವೇಕ ರೈ ಕೃತಿ ಬಿಡುಗಡೆ ಮಾಡಲಿದ್ದಾರೆ. ಡಾ| ರಾಧಾಕೃಷ್ಣ ಕೆ. ಶಾಸ್ತ್ರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ಸಿರಿ ಪ್ರಕಾಶನ ಪಾವಂಜೆ ಇದರ ಡಾ| ಗಣೇಶ ಅಮೀನ್ ಸಂಕಮಾರ್ ತಿಳಿಸಿದ್ದಾರೆ. ಕೋವಿಡ್ ನಿಯಮದ ಅನುಸಾರವಾಗಿ ಕಾರ್ಯಕ್ರಮ ನಡೆಯಲಿದ್ದು ಸಾಹಿತ್ಯಾಭಿಮಾನಿಗಳು ಸಹಕರಿಸುವಂತೆ ಆಕೃತಿ ಆಶಯ ಪಬ್ಲಿಕೇಷನ್ಸ್ನ ಮುಖ್ಯಸ್ಥ ಕಲ್ಲೂರು ನಾಗೇಶ ತಿಳಿಸಿದ್ದಾರೆ.