ಮುಂಬಯಿ (ಆರ್ಬಿಐ), ಜ.30: ಉಡುಪಿ ಉಳ್ಳೂರು ಪಾದೆಬೆಟ್ಟು ಕೆಮುಂಡೆ ಕವಿತಾ ವಿಲ್ಲಾ ನಿವಾಸಿ ಸದಾನಂದ ವಾಸು ಶೆಟ್ಟಿ (62) ಅವರು ಇಂದಿಲ್ಲಿ ಶನಿವಾರ (30.01.2021)ಮಂಗಳೂರಿನ ಎ.ಜೆ ಅಸ್ಪತ್ರೆಯಲ್ಲಿ ನಿಧನರಾದರು.
ಮೃತರು ಉಪನಗರ ನಲ್ಲಸೋಪರಾ ನಿವಾಸಿ ಹಾಗೂ ಐಡಿಬಿಐ ನಿವೃತ್ತ ಅಧಿಕಾರಿಯಾಗಿದ್ದು ಊರಿಗೆ ಹೋದಲ್ಲೇ ಅಸೌಖ್ಯರಾಗಿದ್ದರು. ಎಸ್.ಕೆ ಶೆಟ್ಟಿ ಅವರು ಮದರ್ ಇಂಡಿಯಾ ರಾತ್ರಿ ಶಾಲೆ ಹಳೆ ವಿದ್ಯಾಥಿರ್s ಸಂಘದ ಸದಸ್ಯರಾಗಿದ್ದು, ಪತ್ನಿ, ಒಂದು ಹೆಣ್ಣು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.