ಮುಂಬಯಿ, ಮಾ.06: ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಮಾತೃಭೂಮಿ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಮಾಜಿ ಕಾರ್ಯಾಧ್ಯಕ್ಷ, ಹೊಟೇಲು ಉದ್ಯಮ ಸಂಸ್ಥೆ ಆಹಾರ್ ಇದರ ಮಾಜಿ ಅಧ್ಯಕ್ಷ ಕಡಂದಲೆ ಸೀತಾರಾಮ ಎಂ.ಶೆಟ್ಟಿ (82.) ಇಂದಿಲ್ಲಿ ಶನಿವಾರ (ಮಾ.06) ತನ್ನ ಸ್ವಗೃಹದಲ್ಲಿ ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆ ಇಲ್ಲಿನ ಕಡಂದಲೆ ತುಲೆಮುಗೇರು ಮನೆತನದವರಾದ ಮೃತರು ಬಂಟ್ಸ್ ಸಂಘ ಮುಂಬಯಿ ಇದರ ಸಕ್ರೀಯ ಕಾರ್ಯಕರ್ತರಾಗಿ, ಬಂಟ್ಸ್ ನ್ಯಾಯ ಮಂಡಳಿ ಗೌ| ಪ್ರ. ಕಾರ್ಯದರ್ಶಿ ಮತ್ತು ಸಲಹಾ ಸಮಿತಿ ಸದಸ್ಯರಾಗಿ, ಸಮಾಜ ಸೇವಕರಾಗಿ ಅನುಪಮ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು
ಮೃತರು ಇಬ್ಬರು ಸುಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.