ಮುಂಬಯಿ (ಆರ್ಬಿಐ), ಮಾ.19: ಶ್ರೀ ಜೈನ ಮಠ ಜೈನಕಾಶಿ ಮೂಡುಬಿದಿರೆ ಇದರ ಶ್ರೀ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ಇಂದಿಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಹಾಕಿಸಿ ಕೊಂಡರು.
ಆರೋಗ್ಯಸೇತು ಆಪ್ನಲ್ಲಿ ಆಧಾರ್ ಕಾರ್ಡ್ ಮುಖೆನ ಹೆಸರು ನೋಂದಾಯಿಸಿ ಕೊಂಡು ಇಂದು ಅಪರಾಹ್ನ ಮೂಡುಬಿದಿರೆ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆ ಹಾಕಿ ಕೊಂಡು 15 ನಿಮಿಷ ಲಸಿಕೆ ಹಾಕಿದ ನಂತರ ಎಂದಿನಂತೆ ತಮ್ಮ ನಗುಮೊಗದ ಲವಲವಿಕೆಯಿಂದಲೇ ಶ್ರೀ ಜೈನ ಮಠಕ್ಕೆ ಹಿಂತಿರುಗಿದರು.
ಮುಖ್ಯ ವೈದ್ಯಾಧಿಕಾರಿ ಕೆ.ಶಕುಂತಲಾ, ನಾಗರಾಜ್ ಭಟ್ ಮರಕಡ, ಅಭಯ ಕುಮಾರ್ ಉಪಸ್ಥಿತರಿದ್ದರು ಶ್ರೀಗಳು ಆಗಾಗ್ಗ ಅಂತರ್ರಾಜ್ಯ ಪ್ರಯಾಣ ಮಾಡುತ್ತಿರುವುದರಿಂದ ತಮ್ಮ ಆರೋಗ್ಯ ಮತ್ತು ಸಮಾಜ ಸ್ವಸ್ಥ್ಯತೆಗಾಗಿ ಕೊವಿಡ್ ಲಸಿಕೆ ಹಾಕಿಸಿ ಕೊಂಡಿರುವುದಾಗಿ ಶ್ರೀ ಜೈನ ಮಠ ಮೂಡುಬಿದಿರೆ ಇದರ ವ್ಯವಸ್ಥಾಪಕ ಸಂಜಯಂಥ ಕುಮಾರ್ ಶೆಟ್ಟಿ ತಿಳಿಸಿದರು