ಕೋಟ: ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೋಟ ವಿವೇಕ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕ ಗಣೇಶ್ ಶೆಟ್ಟಿಗಾರ ಆಯ್ಕೆಯಾದರು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ರಾಜ್ಯ ಅಧ್ಯಕ್ಷ ಹನುಮಂತಪ್ಪನವರ ಸಮ್ಮುಖದಲ್ಲಿ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ಸಭಾಭವನದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಗಣೇಶ್ ಕುಮಾರ್ ಶೆಟ್ಟಿ,ಕಾರ್ಯದರ್ಶಿ ಯಾಗಿ ಕೊಲ್ಲೂರು ಶ್ರೀ ಮುಕಾಂಬಿಕಾ ಪ್ರೌಢ ಶಾಲೆಯ ಸಚಿನ್ ಕುಮಾರ್ ಶೆಟ್ಟಿ,ಕೋಶಾಧಿಕಾರಿಯಾಗಿ ಕಿದಿಯೂರು ವಿದ್ಯಾ ಸಮುದ್ರ ತೀರ್ಥ ಪ್ರೌಢ ಶಾಲೆಯ ಸಂಪತ್ ಕುಮಾಗಿ, ಉಪಾಧ್ಯಕ್ಷರಾಗಿ ಬಸ್ರೂರು ನಿವೇದಿತಾ ಪ್ರೌಢ ಶಾಲೆಯ ಪ್ರದೀಪ ಕುಮಾರ್ ಶೆಟ್ಟಿ,ಕುಕ್ಕುಂದೂರು, ಕಾರ್ಕಳ ಮಹಾತ್ಮ ಗಾಂಧಿ ಪ್ರೌಢ ಶಾಲೆ ಪ್ರಶಾಂತ ಕುಮಾರ್ ಶೆಟ್ಟಿ,ಕಡಿಯಾಳಿ ಕಮಲಾಬಾೈ ಪ್ರೌಢ ಶಾಲೆಯ ವಿಜಯಲಕ್ಷ್ಮೀ, ಚೇರ್ಕಾಡಿ ಶಾರದಾ ಪ್ರೌಢ ಶಾಲೆಯ ಪ್ರಸನ್ನ ಕುಮಾರ್ ಶೆಟ್ಟಿ,ಜೊತೆ ಕಾರ್ಯದರ್ಶಿಯಾಗಿ ಬೈಂದೂರು ರತ್ತುಬಾೈ ಪ್ರೌಢ ಶಾಲೆ ಪ್ರಕಾಶ್,ಸಂಘಟನಾ ಕಾರ್ಯದರ್ಶಿಯಾಗಿ ಮಣಿಪಾಲ ಪದವಿ ಪೂರ್ವ ಕಾಲೇಜು ಪ್ರಭಾಕರ ಬಂಡಿ,ಸದಸ್ಯರಾಗಿ ಕೋಡಿ ಬ್ಯಾರಿಸ್ ಪ್ರೌಢ ಶಾಲೆಯ ಜಯಶೀಲ ಶೆಟ್ಟಿ,ಮುದೂರು ಭಾರತಮಾತಾ ಪ್ರೌಢ ಶಾಲೆಯ ಚಂದ್ರಶೇಖರ ಪೂಜಾರಿ,ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಾಗರತ್ನ ಆಯ್ಕೆಯಾದರು.
..