ಮುಂಬಯಿ (ಆರ್ ಬಿಐ), ಆ.21: 76ನೇ ಭಾರತೀಯ ಸ್ವಾತಂತ್ರ ವಾರ್ಷಿಕೋತ್ಸವವನ್ನು ಕತಾರ್ನ ದೋಹದಲ್ಲಿರುವ ಭಾರತೀಯ ಸಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಆಚರಿಸಲಾಯಿತು. ಮಾತೃಭೂಮಿಯಿಂದ ಸುಪ್ರಸಿದ್ಧ ಸಂಗೀತ ವಿದ್ವಾಂಸ ಸಚಿನ್ ಪಟ್ ವರ್ಧನ್ ಹಾಗೂ ಹೇಮಂತ್ ಮತ್ಕಾರ್ ಅವರನ್ನು ಆಹ್ವಾನಿಸಿ ಬುಧವಾರ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು.
ಭಾರತ ಸರಕಾರದ ಐಸಿಸಿಆರ್ ನೇತೃತ್ವದಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದ ಐಸಿಸಿ ಸಂಚಾಲನೆಯಡಿಯಲ್ಲಿ ಕಲಾವಿದರು ಕತಾರ್ನ ವಿವಿಧ ಸ್ಥಳಗಳಲ್ಲಿ ಸಂಗೀತ ಕಛೇರಿ ನೀಡಿದರು. ಅಶೋಕ ಸಭಾಂಗಣದಲ್ಲಿ ಘನವೆತ್ತ ರಾಯಭಾರಿ ಶ್ರೀ ವಿಪುಲ್ ಸಮ್ಮುಖದಲ್ಲಿ ಹಾಗೂ ನೂರಾರು ಸಂಗೀತ ಪ್ರಿಯರ ಉಪಸ್ಥಿತಿಯಲ್ಲಿ ಮನಮೋಹಕ ಪ್ರದರ್ಶನ ನೀಡಿದರು. ಕಲಾವಿದರನ್ನು ವಿಪುಲ್ಐ, ಸಿಸಿ ಅಧ್ಯಕ್ಷ ಮಣಿಕಂಠನ್, ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಐಸಿಸಿ ಆಡಳಿತ ಸಮಿತಿ ಸದಸ್ಯರು ಸೇರಿ ಸನ್ಮಾನಿಸಿದರು.