ಮುಂಬಯಿ (ಶ್ರೀಲಂಕಾ, ಕೊಲಂಬೊ) ಆರ್ ಬಿಐ, ಆ 25: ಭಾರತೀಯ ಸಾಂಸ್ಕೃತಿಕ ಸೌರಭ ಪರಿಷತ್ ಹಾಗೂ ಏಶಿಯನ್ ಮೀಡಿಯಾ ಕಲ್ಚರಲ್ ಅಸೋಸಿಯೇಷನ್, ಶ್ರೀಲಂಕಾ ಸಂಯುಕ್ತವಾಗಿ. 40ನೇ ಅಂತರಾಷ್ಟ್ರೀಯ ಸಾಂಸ್ಥಿಕ ಸೌರಭ ವನ್ನು ಕೊಲಂಬೊದ ಪರ್ಫಾರ್ಮಿಂಗ್ ಆರ್ಟ್ಸ್ ಯುನಿವರ್ಸಿಟಿಯ ಸಭಾಂಗಣದಲ್ಲಿ ಆಗಸ್ಟ್ 25 ರಂದು ಆಯೋಜಿಸಿದ್ದವು. ಸಮಾರಂಭವನ್ನು. ಶ್ರೀಲಂಕಾದ. ಬುದ್ಧ ಶಾಸನ ಮತ್ತು. ಧಾರ್ಮಿಕ ಮತ್ತು ಸಾಂಸ್ಕೃತಿಕ. ಸಚಿವರಾದ ಶ್ರೀ. ವಿದುರ ವಿಕ್ರಮ ನಾಯಕೆ ಜ್ಯೋತಿ ಬೆಳಗಿಸಿ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲೆ ಮತ್ತು ಸಂಸ್ಕೃತಿಗಳು ಸ್ವಸ್ಥ ಸಮಾಜದ ಮುಖವಾಣಿಗಳು ಅವುಗಳನ್ನು ಪೆÇ್ರೀತ್ಸಾಹಿಸುವ ಮೂಲಕ ಆರೋಗ್ಯಪೂರ್ಣ. ಸಮಾಜವನ್ನು ನಿರ್ಮಾಣ ಮಾಡಬಹುದು ಎಂದರು.
ವೇದಿಕೆಯಲ್ಲಿ ಗಣ್ಯರಾದ ಅಂಕುರ್ ದತ್ತ, ಅಮ್ಕ ಇಂಡಿಯಾ ಪದಾಧಿಕಾರಿ ಮದನ್ ಗೌಡ, ಡಾ| ಅಬ್ದುಲ್ ಶಕೀಲ್, ಕೆ ಪಿ ಮಂಜುನಾಥ್ ಸಾಗರ್ , ಆಮ್ಕ ಶ್ರೀ ಲಂಕಾ ಅಧ್ಯಕ್ಷ ಉಪುಲ್ ಜಯಕಾಂತ ಜಯಸಿಂಘೆ ಡಾ. ಈದಾ ಶ್ಯಾಮುಯಲ್ ರೆಡ್ಡಿ ಉಪಸ್ಥಿತರಿದ್ದರು.